ಬೆಂಗಳೂರು, ಜೂನ್ 5: ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನದ ಅಂಗವಾಗಿ ಕವಚ ಫೌಂಡೇಶನ್ ವತಿಯಿಂದ ಬಿಟಿಎಂ ಲೇಔಟ್ನಲ್ಲಿ ವಾಕ್ಥಾನ್ ಹಾಗೂ ವೃಕ್ಷಾರೋಪಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕರ್ನಾಟಕ ವಿಧಾನ ಪರಿಷತ್ನ ಪ್ರತಿಪಕ್ಷದ ಮುಖ್ಯ ಸಚೇತಕರು ಹಾಗೂ ಎಂಎಲ್ಸಿ ಎನ್. ರವಿ ಕುಮಾರ್, ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದ್ರೆ, ಕೆ. ದೇವದಾಸ್, ಚಂದ್ರಶೇಖರ್ ರಾಜು, ಕಾರ್ತಿಕ್ ದರ್ಶನ, ಮಂಜುನಾಥ್, ಅವಿನಾಶ್, ಮೋಹನ್, ರಾಜೇಂದ್ರ ರೆಡ್ಡಿ, ಶ್ರೀನಿವಾಸ್ ಗೌಡ, ಪ್ರತಿಭಾ, ವಾಣಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






























































