Tag: ISKCON
ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ಇಸ್ಕಾನ್-ಬೆಂಗಳೂರು ಭಕ್ತರ ಇಪ್ಪತ್ತೈದು ವರ್ಷಗಳ ಹೋರಾಟ ಯಶಸ್ವಿಯಾಗಿದೆ
ಬೆಂಗಳೂರು/ದೆಹಲಿ, ಮೇ 16: ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ಇಸ್ಕಾನ್-ಬೆಂಗಳೂರು ಭಕ್ತರ ಇಪ್ಪತ್ತೈದು ವರ್ಷಗಳ ಹೋರಾಟ ಯಶಸ್ವಿಯಾಗಿದೆ
• ಶ್ರೀಲ ಪ್ರಭುಪಾದರನ್ನು ಅವರ ಮಹಾ ಸಮಾಧಿಯ ನಂತರ ಇಸ್ಕಾನ್ನ ಆಚಾರ್ಯರನ್ನಾಗಿ ಸ್ಥಾಪಿಸಲು ಇಸ್ಕಾನ್-ಬೆಂಗಳೂರು ಭಕ್ತರ ಇಪ್ಪತ್ತೈದು ವರ್ಷಗಳ ಹೋರಾಟ, ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ಯಶಸ್ವಿಯಾಗಿದೆ
• ಸುಪ್ರೀಂ ಕೋರ್ಟ್ ತೀರ್ಪು ಇಸ್ಕಾನ್-ಬೆಂಗಳೂರು ತನ್ನ ನಿಲುವನ್ನು ದೃಢೀಕರಿಸಲು ದಾರಿ ಮಾಡಿಕೊಡುತ್ತದೆ: ಶ್ರೀಲ ಪ್ರಭುಪಾದರು ಇಸ್ಕಾನ್ನ ಏಕೈಕ ಆಚಾರ್ಯರು
• ಇಸ್ಕಾನ್ ಹರೇ ಕೃಷ್ಣ ಗಿರಿಯ ದೇವಸ್ಥಾನವು ಇಸ್ಕಾನ್-ಬೆಂಗಳೂರು ಸಂಸ್ಥೆಗೆ ಸೇರಿದ್ದು ಮತ್ತು ಇಸ್ಕಾನ್-ಮುಂಬೈ ಸಂಸ್ಥೆಗೆ ಸೇರಿಲ್ಲ: ಸುಪ್ರೀಂ ಕೋರ್ಟ್
ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ಹರೇ ಕೃಷ್ಣ ಗಿರಿಯ ದೇವಸ್ಥಾನವು ಇಸ್ಕಾನ್-ಬೆಂಗಳೂರು ಸಂಸ್ಥೆಗೆ ಸೇರಿದ್ದು, ಇಸ್ಕಾನ್-ಮುಂಬೈ ಸಂಸ್ಥೆಗೆ ಸೇರಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇಸ್ಕಾನ್-ಬೆಂಗಳೂರು ಸಂಸ್ಥೆಯ ವ್ಯವಹಾರಗಳಲ್ಲಿ ಇಸ್ಕಾನ್-ಮುಂಬೈ ಸಂಸ್ಥೆಯು ಹಸ್ತಕ್ಷೇಪ ಮಾಡದಂತೆ ಸುಪ್ರೀಂ ಕೋರ್ಟ್ ನಿಷೇಧಿಸಿದೆ.
ಸಾರಾಂಶ:
ಇಸ್ಕಾನ್-ಬೆಂಗಳೂರು ಮತ್ತು ಇಸ್ಕಾನ್-ಮುಂಬೈ ನಡುವಿನ ದೀರ್ಘಕಾಲದ ವಿವಾದವು 1977 ರಲ್ಲಿ ಶ್ರೀಲ ಪ್ರಭುಪಾದರು ಮಹಾ ಸಮಾಧಿ ಪಡೆದ ನಂತರ ಪ್ರಾರಂಭವಾಯಿತು, ಕೆಲವು ಇಸ್ಕಾನ್ ನಾಯಕರು ಋತ್ವಿಕ್ ದೀಕ್ಷಾ ವ್ಯವಸ್ಥೆಯನ್ನು ಸ್ಥಾಪಿಸುವ ಅವರ ನಿರ್ದೇಶನಕ್ಕೆ ವಿರುದ್ಧವಾಗಿ ಅವರ ಉತ್ತರಾಧಿಕಾರಿಗಳೆಂದು ಹೇಳಿಕೊಂಡರು. ಮಧು ಪಂಡಿತ್ ದಾಸ ನೇತೃತ್ವದ ಇಸ್ಕಾನ್-ಬೆಂಗಳೂರು, ಶ್ರೀಲ ಪ್ರಭುಪಾದರನ್ನು ಏಕೈಕ ಆಚಾರ್ಯರೆಂದು ಎತ್ತಿಹಿಡಿದು ಸ್ವಯಂಘೋಷಿತ ಗುರುಗಳ ವಿಧಾನವನ್ನು ವಿರೋಧಿಸಿತು. 1988 ರಲ್ಲಿ ಇಸ್ಕಾನ್-ಬೆಂಗಳೂರು ಸಂಸ್ಥೆಗೆ ಭೂಮಿಯನ್ನು BDA ಮೂಲಕ ಮಂಜೂರು ಮಾಡಲಾಗಿದ್ದರೂ, 2000 ರಲ್ಲಿ, ಇಸ್ಕಾನ್-ಮುಂಬೈ ಸಂಸ್ಥೆಯು ಬೆಂಗಳೂರು ದೇವಾಲಯದ ನಿಯಂತ್ರಣವನ್ನು ತೆಗೆದುಕೊಳ್ಳಲು ಪ್ರಯತ್ನಿಸಿತು. ಇದು 25 ವರ್ಷಗಳ ಕಾನೂನು ಹೋರಾಟಕ್ಕೆ ನಾಂದಿ ಹಾಡಿತು, ಈಗ ಸುಪ್ರೀಂ ಕೋರ್ಟ್ ಇಸ್ಕಾನ್-ಬೆಂಗಳೂರು ಸಂಸ್ಥೆಯ ಪರವಾಗಿ ತೀರ್ಪು ನೀಡುವ ಮೂಲಕ ಈ ಸಂಘರ್ಷವನ್ನು ಮುಕ್ತಾಯಗೊಳಿಸಿದೆ.
ಈ ಬಗ್ಗೆ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರು, ಅಕ್ಷಯ ಪಾತ್ರ ಪ್ರತಿಷ್ಠಾನದ ಸ್ಥಾಪಕ ಮತ್ತು ಅಧ್ಯಕ್ಷರು, ಜಾಗತಿಕ ಹರೇ ಕೃಷ್ಣ ಆಂದೋಲನದ ಅಧ್ಯಕ್ಷರು ಮತ್ತು ಮಾರ್ಗದರ್ಶಕರಾದ ಶ್ರೀ ಮಧು ಪಂಡಿತ ದಾಸರು ಹೀಗೆ ಹೇಳಿದರು:
"ಈ ಆಂತರಿಕ ಇಸ್ಕಾನ್ ಹೋರಾಟವು ಇಸ್ಕಾನ್ನ ಸಂಸ್ಥಾಪಕ ಆಚಾರ್ಯ ಶ್ರೀಲ ಪ್ರಭುಪಾದರ ಉತ್ತರಾಧಿಕಾರಿಗಳೆಂದು ಹೇಳಿಕೊಂಡ ಸ್ವಯಂ ಘೋಷಿತ ಗುರುಗಳ ವಿರುದ್ಧವಾಗಿತ್ತು, ಶ್ರೀಲ ಪ್ರಭುಪಾದರು ಅವರ ಮಹಾ ಸಮಾಧಿಗೆ ಮುಂಚಿತವಾಗಿ ಅವರಿಗೆ ಅಧಿಕಾರ ನೀಡಲಿಲ್ಲ. ಬದಲಾಗಿ ಅವರು ಋತ್ವಿಕ್ ವ್ಯವಸ್ಥೆಯನ್ನು ಸ್ಥಾಪಿಸಿದರು, ಇದರಿಂದಾಗಿ ಇಸ್ಕಾನ್ನಲ್ಲಿರುವ ಎಲ್ಲಾ ಭಕ್ತರು ಎಲ್ಲಾ ಸಮಯದಲ್ಲೂ ಸಂಸ್ಥಾಪಕ ಆಚಾರ್ಯ ಶ್ರೀಲ ಪ್ರಭುಪಾದರ ನೇರ ಶಿಷ್ಯರಾಗಿರುತ್ತಾರೆ. ಆದಾಗ್ಯೂ, 2000 ರಲ್ಲಿ ಸಯಂಘೋಷಿತ ಗುರುಗಳ ಸಂಸ್ಥೆಯಾದ ಇಸ್ಕಾನ್ ಮುಂಬೈ ಬೆಂಗಳೂರು ದೇವಸ್ಥಾನದ ಆಸ್ತಿಯು ಅವರ ಸಂಸ್ಥೆಯ ನಿಯಂತ್ರಣದಲ್ಲಿ ಶಾಖೆಯಾಗಿ ನಿರ್ವಹಿಸಬೇಕು ಎಂಬ ನಿಲುವಾಗಿಸಿಕೊಂಡು ಇಸ್ಕಾನ್ ಬೆಂಗಳೂರಿನ ಭಕ್ತರನ್ನು ಇಸ್ಕಾನ್ ಸಂಸ್ಥೆಯಿಂದ ಹೊರಹಾಕಲು ಪ್ರಯತ್ನಿಸಿದರು. ಆಗ ಇಸ್ಕಾನ್ ಬೆಂಗಳೂರು ಸಂಸ್ಥೆಯು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಇದು ನ್ಯಾಯಾಂಗದ ಹೋರಾಟವಾಗಿ ಮಾರ್ಪಟ್ಟಿತು.
"ಇಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ 25 ವರ್ಷಗಳ ನ್ಯಾಯಾಲಯದ ಹೋರಾಟವನ್ನು ಕೊನೆಗೊಳಿಸಿದೆ, ಬಿಡಿಎ 1988 ರಲ್ಲಿ ಬೆಂಗಳೂರಿನಲ್ಲಿ ನೋಂದಾಯಿಸಲಾದ ಸ್ವತಂತ್ರ ಇಸ್ಕಾನ್ ಸೊಸೈಟಿಯಾದ ಇಸ್ಕಾನ್ ಬೆಂಗಳೂರು ಸೊಸೈಟಿಗೆ ದೇವಾಲಯದ ಭೂಮಿಯನ್ನು ಮಂಜೂರು ಮಾಡಿತ್ತು ಮತ್ತು ದೇವಾಲಯವನ್ನು ನಿರ್ಮಿಸಲು ಆಸ್ತಿ ಮತ್ತು ಹಣವನ್ನು ಬೆಂಗಳೂರಿನಲ್ಲಿ ಸಂಗ್ರಹಿಸಲಾಗಿತ್ತು. ಮೂಲಭೂತವಾಗಿ, ಇಸ್ಕಾನ್ ಮುಂಬೈ ಇಸ್ಕಾನ್ ಬೆಂಗಳೂರಿನ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ನಿಷೇದಾಜ್ಞೆ ನೀಡಿದೆ. ಈ ತೀರ್ಪಿನ ನಂತರ ಶ್ರೀಲ ಪ್ರಭುಪಾದರನ್ನು ಮಾತ್ರ ಇಸ್ಕಾನ್ನ ಏಕೈಕ ಆಚಾರ್ಯರಾಗಿ ಸ್ವೀಕರಿಸಲು ಬಯಸುವ ಸಾವಿರಾರು ಭಕ್ತರನ್ನು ಇನ್ನು ಮುಂದೆ ಇಸ್ಕಾನ್ನಿಂದ ಹೊರಹಾಕಲು ಸಾಧ್ಯವಿಲ್ಲ."
ಇಸ್ಕಾನ್-ಬೆಂಗಳೂರು ಸಂಸ್ಥೆ ಮತ್ತು ಇಸ್ಕಾನ್-ಮುಂಬೈ ಸಂಸ್ಥೆಯ ನಡುವಿನ ಈ ವಿವಾದದ ಹಿನ್ನೆಲೆ.
1977 ರಲ್ಲಿ, ಶ್ರೀಲ ಪ್ರಭುಪಾದರು (ಇಸ್ಕಾನ್ನ ಸ್ಥಾಪಕ - ಆಚಾರ್ಯರು) ಮಹಾ ಸಮಾಧಿ ಹೊಂದುವ ಸ್ವಲ್ಪ ಮೊದಲು, ಅವರು ಭವಿಷ್ಯದಲ್ಲಿ ಋತ್ವಿಕ್ಗಳು ಎಂಬ ತಮ್ಮ ಪ್ರತಿನಿಧಿಗಳ ಮೂಲಕ ದೀಕ್ಷೆ (ದೀಕ್ಷೆ) ವ್ಯವಸ್ಥೆಯನ್ನು ಸ್ಥಾಪಿಸಿದ್ದರು. ಈ ವ್ಯವಸ್ಥೆಯ ಪ್ರಕಾರ, ಭವಿಷ್ಯದಲ್ಲಿ ದೀಕ್ಷೆ ಪಡೆದ ಎಲ್ಲಾ ಭಕ್ತರು ಶ್ರೀಲ ಪ್ರಭುಪಾದರ ನೇರ ಶಿಷ್ಯರಾಗುತ್ತಾರೆ ಮತ್ತು ಅವರು ಇಸ್ಕಾನ್ನ ಆಚಾರ್ಯರಾಗಿ ಉಳಿಯುತ್ತಾರೆ.
ಆದರೆ ಅವರ ಮಹಾ ಸಮಾಧಿಯ ನಂತರ, ನಾಯಕತ್ವದ ಸ್ಥಾನಗಳಲ್ಲಿದ್ದ ಅವರ ಮಹತ್ವಾಕಾಂಕ್ಷೆಯ ಶಿಷ್ಯರು (ಹೆಚ್ಚಾಗಿ ಪಾಶ್ಚಿಮಾತ್ಯರು) ಶ್ರೀಲ ಪ್ರಭುಪಾದರ ಲಿಖಿತ ನಿರ್ದೇಶನಗಳನ್ನು ಪಾಲಿಸಲಿಲ್ಲ ಮತ್ತು ತಮ್ಮನ್ನು ಇಸ್ಕಾನ್ನ ಉತ್ತರಾಧಿಕಾರಿ ಆಚಾರ್ಯರು ಎಂದು ಹೇಳಿಕೊಂಡರು ಮತ್ತು ದೀಕ್ಷೆ ನೀಡಲು ಪ್ರಾರಂಭಿಸಿದರು. ಈ ಸ್ವಯಂ ಘೋಷಿತ ಆಚಾರ್ಯರು ಉನ್ನತ ಅಲಂಕಾರಿಕ ಸ್ಥಾನಗಳನ್ನು ಸ್ವೀಕರಿಸಿದರು, ಗೌರವಾನ್ವಿತ ಬಿರುದುಗಳನ್ನು ಪಡೆದರು, ಅವರ ಬಗ್ಗೆ ಹಾಡಲು ಹಾಡುಗಳನ್ನು ರಚಿಸಿದರು, ಐಷಾರಾಮಿ ಜೀವನಶೈಲಿಯನ್ನು ನಡೆಸಿದರು - ಇವೆಲ್ಲವೂ ಶ್ರೀಲ ಪ್ರಭುಪಾದರು ನಡೆಸುತ್ತಿದ್ದ ಮತ್ತು ಕಲಿಸಿದ ಸರಳ ಜೀವನಕ್ಕೆ ವಿರುದ್ಧವಾಗಿತ್ತು.
ಪ್ರಪಂಚದಾದ್ಯಂತದ ಇಸ್ಕಾನ್ ಭಕ್ತರು ಈ ಸ್ವಯಂ ಘೋಷಿತ ಮತ್ತು ಸ್ವಯಂ ನಾಮನಿರ್ದೇಶಿತ ಆಚಾರ್ಯ ವ್ಯವಸ್ಥೆಯನ್ನು ವಿರೋಧಿಸಿದಾಗ, ಅವರನ್ನು ಕಿರುಕುಳ, ಹಿಂಸೆ, ಬೆದರಿಕೆ ನೀಡುವದೇ ಅಲ್ಲದೆ, ಇಸ್ಕಾನ್ ದೇವಾಲಯಗಳಿಂದ ಅವರನ್ನು ಹೊರಹಾಕಲಾಯಿತು ಮತ್ತು ಅವರ ಈ ಅನ್ಯಾಯವನ್ನು ವಿರೋಧಿಸಿದ ಒಬ್ಬ ಭಕ್ತರನ್ನು ಕೊಲೆಯು ಕೂಡ ಮಾಡಲಾಗಿತ್ತು. (ಸುಲೋಚನ ದಾಸ್, 1984).
1999 ರಲ್ಲಿ, ಶ್ರೀ ಮಧು ಪಂಡಿತ್ ದಾಸ ನೇತೃತ್ವದ ಇಸ್ಕಾನ್-ಬೆಂಗಳೂರಿನ ಭಕ್ತರು ಈ ಸ್ವಯಂ ಘೋಷಿತ ಮತ್ತು ಸ್ವಯಂ ನಾಮನಿರ್ದೇಶಿತ...
ಗೋವರ್ಧನ ಪೂಜೆ ಮತ್ತು ದೀಪಾವಳಿ ಹಬ್ಬದ ವಿಶೇಷ ಆಚರಣೆ
ಬೆಂಗಳೂರು ನವೆಂಬರ್ 15: ವೃಂದಾವನದ ನಿವಾಸಿಗಳನ್ನು ಇಂದ್ರನ ಕೋಪದಿಂದ ರಕ್ಷಿಸಲು ಪರಮಾತ್ಮ ಶ್ರೀ ಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿದ ನೆನಪಿಗಾಗಿ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್ - ನವೆಂಬರ್) ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ವೃಂದಾವನದ...